ದೇವರು ಎಲ್ಲರಿಗಾಗಿ

ಸನ್ಯಾಸಿಗಳಿಗಷ್ಟೆ ಅಲ್ಲ ದೇವರ ದರುಶನ
ಗೃಹಸ್ಥರಿಗೂ ಅವನು ಕಾಣುತ್ತಾನೆ
ಅಚಲ ಶೃದ್ಧಾಭಕ್ತಿ ವ್ಯಾಕುಲತೆಯೊಂದೇ
ಕಂಡು ತನ್ನ ರೂಪು ತೋರುತ್ತಾನೆ

ಭಗವಾನ ಶ್ರೀ ರಾಮಕೃಷ್ಣ ಪರಮಹಂಸರು
ಹೇಳಿದರು ಈ ಭೂಜನರಿಗೆ ತಾವು
ಸಂತ ಸಜ್ಜನರ ಸಹವಾಸ ಏಕಾಂತ
ನಿರ್ಜನ ಸ್ಥಳಗಳಲಿ ಜಪಿಸಿ ನೀವು

ನಿಮ್ಮದೆಲ್ಲವ ಅವಗೆ ಅರ್ಪಿಸಬೇಕು
ಅಹಂಕಾರ ಸ್ವಾರ್ಥಗಳು ತೊಡೆಯಬೇಕು
ಪ್ರಪಂಚದ ವ್ಯಾಮೋಹ ಮರೆಯಬೇಕು
ಪಾರಮಾರ್ಥ ನಿತ್ಯವೂ ಸಾಧಿಸಬೇಕು

ಸಂತತಿ ಪಡೆದರಾಯ್ತು ದಂಪತಿಯರು
ಅಣ್ಣ ತಂಗಿಯರಂತೆ ಬಾಳಬೇಕು
ಮಾಡುವ ಪ್ರೀತಿ ಕಾರ್ಯಗಳಲ್ಲೂ
ದೇವರಿಗೆ ಧ್ಯಾನಿಸಿ ಬೇಡಬೇಕು

ಕಂಗಳು ಅತ್ತು ತಾನು ಮೊರೆಯಿಡಬೇಕು
ದರ್ಪಣದ ಹಾಗೆ ಸ್ವಚ್ಛ ಹೃದಯಬೇಕು
ಆಗ ಪರಮಾತ್ಮನೆಂಬ ಚುಂಬಕವು
ಮಾಣಿಕ್ಯ ವಿಠಲನಾಗಿ ನಲಿಯಬೇಕು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೨೯
Next post ಅವನಾರೇ ಗೆಳತಿ ಅವನಾರೇ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

cheap jordans|wholesale air max|wholesale jordans|wholesale jewelry|wholesale jerseys